ನಮ್ಮೂರು ನಮ್ಮೂರು

ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ

by 1 on | 2025-01-23 20:18:15

Share: Facebook | Twitter | Whatsapp | Linkedin | Visits: 306


ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ
ರಫ್ತು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿದ ಡಿಸಿ ಜಾನಕಿ ಕೆ.ಎಂ

ಬಾಗಲಕೋಟೆ : ಉದ್ಯಮಿಗಳಿಗೆ ಬಾಗಲಕೋಟೆ ಜಿಲ್ಲೆ ಮುಕ್ತ ಅವಕಾಶವಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಧೈರ್ಯ ಹಾಗೂ ಪರಿಶ್ರಮ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು. 

            ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ವಿ.ಟಿ.ಪಿ.ಸಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ  ಜಿಲ್ಲಾ ಪಂಚಾಯತ್ ನೂತನ ಸಭಾಭವನದಲ್ಲಿ ಗುರುವಾರ  ಆಯೋಜಿಸಲಾಗಿದ್ದ  ಲೀನ್ ಯೋಜನೆ, ಝಡ್.ಇ.ಡಿ ಹಾಗೂ ರಫ್ತು ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಗರವನ್ನು ಉದ್ಘಾಟಿಸಿ ಮಾತನಾಡುತ್ತಾ, ಕಾಸಿಯಾ ಸಂಸ್ಥೆ ರಾಜ್ಯದ ವಿವಿಧ ಭಾಗಗಳಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಬೆಂಬಲ ಮತ್ತು ಅರಿವು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಬಾಗಲಕೋಟೆ ಕೃಷಿ ಆಧಾರಿತ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಬೆಳೆಸಲು ಸ್ಥಳೀಯರ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಹವಾಮಾನ ಹೊಂದಿದ್ದು, ಪರಿಶ್ರಮ ಮತ್ತು ಧೈರ್ಯ ಮುಖ್ಯವಾಗಿದೆ ಎಂದರು.  

           ಬಾಗಲಕೋಟೆ ಯುನಿಯನ್ ಮರ್ಚಂಟ್ ಅಸೋಶಿಯೇಷನ್‍ದ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ ಏಷ್ಯಾದಲ್ಲಿಯೇ ಮುಳುಗಡೆ ಹೊಂದಿದ ದೊಡ್ಡ ಪ್ರದೇಶ ಬಾಗಲಕೋಟೆ ಜಿಲ್ಲೆಯಾಗಿದ್ದು, ಮುಳುಗಡೆ ಹೊಂದಿದ ನಂತರ ಮೂರು ಭಾಗಗಳಾಗಿ ಹರಿದು ಹಂಚಿ ಹೋಗಿದ್ದು, ಇಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ ಹಾಗೂ ವ್ಯಾಪಾರಕ್ಕೆ ಉಪಯುಕ್ತವಾದ ವಾತಾವರಣ ಇದ್ದರೂ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿಲ್ಲ. ಇಲ್ಲಿ ಈ ಎಲ್ಲ ಕ್ಷೇತ್ರಕ್ಕೆ ದುಡಿಯುವ ಬಂಡವಾಳ ಹಾಕುವ ಬಂಡವಾಳ ಶಾಹಿಗಳು ಕೂಡಾ ಮುಂದೆ ಬರುತ್ತಿಲ್ಲ. ಕಾಸಿಯಾ ಸಂಸ್ಥೆಯವರು ಕೈಗಾರಿಕೆ ಸ್ಥಾಪಿಸಲು ಮುಂದೆ ಬಂದಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು. 

            ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ  ಮಾತನಾಡಿ  ಸ್ಥಳೀಯರು ಉದ್ಯಮದತ್ತ ಆಸಕ್ತಿ ತೋರಿದರೂ ಹೊರಗಿನಿಂದ ಹೆಚ್ಚಿನ ಕೈಗಾರಿಕೆಗಳು ಜಿಲ್ಲೆಗೆ ಬರಲು ಸಾಧ್ಯವಾಗುತ್ತದೆ. ನಮ್ಮ ಯೋಜನೆಗಳು ಅಂತರರಾಷ್ಟ್ರೀಯ ಬೇಡಿಕೆಗೆ ತಕ್ಕಂತೆ ರೂಪುಗೊಳ್ಳಬೇಕು. ಸಣ್ಣ ಕೈಗಾರಿಕೆಗಳ ಅಭಿವೃದ್ದಿಯೇ ಆರ್ಥಿಕ ಬೆಳವಣಿಗೆಗೆ ದಾರಿ ಎಂದ ಅವರು ಮುಂದಿನ ಒಂದು ವರ್ಷದ ಒಳಗಾಗಿ ಕನಿಷ್ಟ 50 ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. 

        ಕಾಸಿಯಾದ ವಿಶೇಷ ಪ್ರತಿನಿಧಿ ಹಾಗೂ ಉದ್ಯಮಿ ಆನಂದ ಜಿಗಜಿನ್ನಿ ಮಾತನಾಡಿ ಕಾಸಿಯಾದವರು ಜಿಲ್ಲೆಯಲ್ಲಿ ಉದ್ಯಮಗಳನ್ನು ಸ್ಥಾಪನೆಗೆ ಉತ್ತೇಜನ ನೀಡಲು ಮುಂದೆ ಬಂದಿದ್ದು, ಈ ಅವಕಾಶವನ್ನು ಯುವ ಕೈಗಾರಿಕೋದ್ಯಮಿಗಳು ಇದರ ಸದುಪಯೋಗ ಪಡೆದುಕೊಂಡು ಕೈಗಾರಿಕೆ ಸ್ಥಾಪನೆಗೆ ಮುಂದಾಗಬೇಕಿದೆ ಎಂದರು. ಈ ಸಂದರ್ಭ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಅವರನ್ನು ಬಾಗಲಕೋಟೆ ಜಿಲ್ಲಾ ಯೂನಿಯನ್ ಆಫ್ ಮಚೆರ್ಂಟ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. 

          ಕಾರ್ಯಾಗಾರದಲ್ಲಿ  ಕಾಸಿಯಾ  ಅಧ್ಯಕ್ಷ  ಎಂ.ಜಿ.ರಾಜಗೋಪಾಲ ಕಾರ್ಯಕ್ರಮದ  ಅಧ್ಯಕ್ಷತೆ ಫ್ರ್ವಹಿಸಿದ್ದರು. ಕಲಬುರಗಿಯ ವಿಟಿಪಿಸಿಯ ಸಹಾಯಕ ನಿರ್ದೇಶಕ ಜಾಫರ ಖಾಸಿಂ ಅನ್ಸಾರಿ, ಜಂಟಿ ಕಾರ್ಯದರ್ಶಿ ಸತೀಶ್ ಎನ್, ಖಜಾಂಚಿ ಮಂಜುನಾಥ ಹೆಚ್, ಉಪ ಸಮಿತಿ ಹಾಗೂ ಬಾಗಲಕೋಟೆ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗಣ್ಣ  ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Search
Most Popular
ಒಂದು ಕೋಟಿ ರೂಪಾಯಿ ವಂಚನೆ ಪ್ರಕರಣ ಶ್ರೀ ರಾಮಾರೂಢ ಸ್ವಾಮೀಜಿ ಹೇಳಿದ್ದೇನು?
ಹದಿನಾರು ಚಿನ್ನದ ಪದಕ ಬಾಚಿದ ಚಿನ್ನದ ಹುಡುಗಿ
ತೋಟಗಾರಿಕಾ ಬಿ.ಎಸ್.ಸಿ ಯಲ್ಲಿ 16 ಚಿನ್ನದ ಪದಕ‌ಬಚಿದ ಚಿನ್ನದ ಹುಡುಗಿ
ಹಕ್ಕು ಪತ್ರಕ್ಕೆ ಸಿದ್ಧರಾಮಯ್ಯನವರನ್ನ ಕೇಳಬೇಕಂತಾರೆ ಪಿಡಿಓ:ಕೊಣ್ಣೂರು ಗ್ರಾಮಸ್ಥರು
ಅನ್ಯಗ್ರಹ ಜೀವಿಗಳ ಬಗ್ಗೆ ನಾಸಾ ಸ್ಪೋಟಕ ಮಾಹಿತಿ..!ಏನಾಗಲಿದೆ 2030ರಲ್ಲಿ
ಶ್ರೀ ರಾಮಾರೂಢ ಸ್ವಾಮಿಜಿಗೆ ಕೋಟಿ ವಂಚನೆ:ಕಂತೆ ಕಂತೆ ಹಣ ಜಪ್ತಿ
ರಾಮಾರೂಢ ಶ್ರೀಗಳಿಗೆ ವಂಚಿಸಿದವ ನನ್ನ ಸಹೋದರಿಗೆ ಕಾರು ಬೇಕಂತ ವಂಚಿಸಿದ್ದ
ಸಿಎಂ ಪತ್ನಿ ಮೂಡಾ ಸೈಟ ಹಿಂತಿರುಗಿಸಿದ್ದು ಯಾಕೆ ಗೊತ್ತಾ?ಆರ್.ಬಿ.ತಿಮ್ಮಾಪೂರ್
ಲಡ್ಡು ಮುತ್ಯಾರನ್ನ ಅವಮಾನಿಸಬೇಡಿ ಯೂಟ್ಮಯೂಬ್ಲ್ಯಾ ಸ್ಟಾರ್ ಬಾಗಲಕೋಟ ಮನವಿ
ದೇವರು ಹೆಂಗ‌ ಬರ್ತಾನ?ಬೆಂಕಿ ಬಬಲಾದಿ
ರೋಬೋ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಡಾ.ಕಟ್ಟಿ ಆಸ್ಪತ್ರೆ
ಶ್ರೀ ಮುತ್ತಿನಕಂಠಿ ಹಿರೇಮಠದಲ್ಲಿ ಮನೆಮಾಡಿದ ನವರಾತ್ರಿ ಹಬ್ಬದ ಸಂಭ್ರಮ
Indo Israel Rasavari Project
ಕೈ ಯಲ್ಲಿ ಖಡ್ಗ ಹಿಡಿದು ದುರ್ಗಾ ಮಾತಾ ದೌಡನಲ್ಲಿ ಭಾಗಿಯಾದ ದುರ್ಗೆಯ ಭಕ್ತರು
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಟ್ಟ ಮಾಜಿ ಸಚಿವ ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಕಂಪ್ಲೀಟ ರೌಂಡಪ್
BAGALKOT DAILY ROUNDUP 17-18-2024
BAGALKOT DAILY ROUNDUP 19-18-2024
BAGALKOT DAILY ROUNDUP 22-10-2024
ಎಂ.ಎಲ್.ಸಿ. ಪಿ.ಹೆಚ್.ಪೂಜಾರ ವಿರುದ್ದ ಬಿಜೆಪಿ ಹಿರಿಯ ಮುಖಂಡರ ವಾಗ್ದಾಳಿ
ಮೂವತ್ತರ ಪಾಕ್ ಯುವಕನೊಂದಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಲವ್ ಸ್ಟೋರಿ, ದೇಶಕ್ಕೆ ದ್ರೋಹ
ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನೆ
ಆರ್.ಸಿ.ಬಿ ಅಭಿಮಾನಿಗಳಿಂದ ಗೆಲುವಿಗೆ ಪೂಜೆ
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ
ಯುವಕರನ್ನ ನಾಚಿಸುವಂತಿದೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಯೋಗ
ಮುಂದಿನ ಮುಖ್ಯಮಂತ್ರಿ ಬಾಲಚಂದ್ರ ಜಾರಕಿಹೊಳಿ

Leave a Comment