ಅಪರಾಧ ಅಪರಾಧ

ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು

by 1 on | 2025-01-23 20:23:11

Share: Facebook | Twitter | Whatsapp | Linkedin | Visits: 920


ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಅಯ್ಯೋ ವಿಧಿಯೇ ದಂಪತಿಗಳನ್ನ ಬಲಿ ತೆಗೆದುಕೊಂಡ ಸಾಲ

ಬಾಗಲಕೋಟೆ : ಮಕ್ಕಳ ಮದುವೆಗೆ ಕೈಗಡ ಪಡೆದಿದ್ದ ವಿಪರೀತ ಸಾಲದ ಸುಳಿಗೆ ಸಿಲುಕಿದ ದಂಪತಿಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದ ಯಾದವಾಡ ಬ್ರಿಡ್ಜ್‌ ಬಳಿ ನಡೆದಿದೆ.  ಮುಧೋಳ ನಗರಕ್ಕೆ ಹೊಂದಿಕೊಂಡಿರುವ ಘಟಪ್ರಭಾ ನದಿ ಸೇತುವೆಗೆ ನೇಣುಬಿಗಿಕೊಂಡ ಜೋಡಿ ಜೀವಗಳು ಪ್ರಾಣ ಬಿಟ್ಟಿವೆ. ಮುಧೋಳ ನಗರದ ಯಾದವಾಡ ರಸ್ತೆಯಲ್ಲಿರುವ ಘಟಪ್ರಭಾ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ. ಮಲ್ಲಪ್ಪ ಲಾಳಿ (58 ) ಪತ್ನಿ ಮಹಾದೇವಿ ಲಾಳಿ (51) ಮೃತಪಟ್ಟ ದಂಪತಿಗಳು, ಇಬ್ಬರು ಮೂಲತಃ ಮುಧೋಳ ತಾಲೂಕಿನ ಸೊರಗಾವಿ ಗ್ರಾಮದವರು. ಕಳೆದ 15 ವರ್ಷಗಳಿಂದ ಮೆಟಗುಡ್ಡ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ರು. ಇವ್ರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದಾನೆ. ಜೀವನೋಪಾಯಕ್ಕಾಗಿ ಸಣ್ಣದಾದ ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸ್ತಿದ್ರು. ಇಬ್ಬರು ಹೆಣ್ಣುಮಕ್ಕಳ ಮದುವೆ, ಕೌಟುಂಬಿಕ ಅಡಚಣೆ   ವ್ಯಾಪಾರಕ್ಕಾಗಿ ವಿವಿಧ ಖಾಸಗಿ ವ್ಯಕ್ತಿಗಳ ಬಳಿ ಕೈಗಡ ಸಾಲ ಮಾಡಿದ್ರು‌. ಸಾಲ ನೀಡಿದವರು ನಿತ್ಯ ಹಣ ವಾಪಸ್ ಕೊಡುವಂತೆ ಮನೆ ಬಳಿ ಬರ್ತಿದ್ರು. ಇದರಿಂದ ದಿಕ್ಕು ತೋಚದ ದಂಪತಿಗಳು ನೇಣಿಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬ್ಯಾಂಕ್   ಸೇರಿ 20 ಜನರ ಬಳಿ ಸುಮಾರು ೧೦ ರಿಂದ ೧೫  ಲಕ್ಷ ಸಾಲ ಇತ್ತು ಅಂತ ತಿಳಿದುಬಂದಿದೆ. ಮೃತರಿಗೆ ಯಾವುದೇ ಆಸ್ತಿಪಾಸ್ತಿ ಇಲ್ಲ. ಕೇವಲ ಕಿರಾಣಿ ಅಂಗಡಿ ವ್ಯಾಪಾರದಿಂದ ತಿಂಗಳಿಗೆ 20 ಸಾವಿರ ಆದಾಯ ಬರ್ತಿತ್ತು. ಆದರೆ ಜೀವನ ನಿರ್ವಹಣೆ ಸಾಲದ ಬಡ್ಡಿ ಕಟ್ಟೋದಕ್ಕೂ ಆಗುತ್ತಿರಲಿಲ್ಲ ಹೀಗಾಗಿ ಸಾಕಷ್ಟು ನೊಂದಿದ್ರು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದ ದಂಪತಿ, ಡೆತ್ ನೋಟ್ ನಲ್ಲಿ ಯಾರದ್ದೂ ಅಂತ ಸಾಲ ತೀರಿಸೋದು. ಸಾಲ ಕೊಟ್ಟವರು ಮನೆಗೆ ಬಂದು ಸಾಲದ ಹಣ ಕೊಡಿ ಎಂದು ಕೇಳ್ತಿದ್ದಾರೆ. ಮಾನಸಿಕ‌ ಹಿಂಸೆಯಾಗ್ತಿದೆ.

ಸಾಲ ತೀರಿಸೋದಕ್ಕೆ ಆಗ್ತಿಲ್ಲ. ಅದಕ್ಕೆ‌ ನೊಂದು ಆತ್ಮಹತ್ಯೆ ಮಾಡಿಕೊಳ್ತಿದ್ದೇವೆ. ನಾವು ಯಾರ ಮೇಲೂ ಆರೋಪ ಮಾಡೋದಿಲ್ಲ ಎಂದು ಬರೆದು, ಮಕ್ಕಳಿಗೆ ಕ್ಷಮಿಸಿ ಎಂದು ಬರೆದು ಸಹಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಲೋಕಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸದ್ಯ ಬ್ಯಾಂಕ್ ಹಾಗೂ ಕೈಸಾಲ ಎಂದು ತಿಳಿದು ಬಂದಿದೆ. ಮೈಕ್ರೋಫೈನಾನ್ಸ್  ಸಾಲದ ಕಿರುಕುಳ ಕಂಡುಬಂದಿಲ್ಲ. ಯಾರಿಂದ ಕಿರುಕುಳ ಆಗಿದೆ,ಎಷ್ಟು ಸಾಲವಿತ್ತು ಎಂಬ ಬಗ್ಗೆ ಕುಟುಂಬಸ್ಥರ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳೋದಾಗಿ ಪೊಲೀಸರು ತಿಳಿಸಿದ್ದಾರೆ.

Search
Most Popular
ಒಂದು ಕೋಟಿ ರೂಪಾಯಿ ವಂಚನೆ ಪ್ರಕರಣ ಶ್ರೀ ರಾಮಾರೂಢ ಸ್ವಾಮೀಜಿ ಹೇಳಿದ್ದೇನು?
ಹದಿನಾರು ಚಿನ್ನದ ಪದಕ ಬಾಚಿದ ಚಿನ್ನದ ಹುಡುಗಿ
ತೋಟಗಾರಿಕಾ ಬಿ.ಎಸ್.ಸಿ ಯಲ್ಲಿ 16 ಚಿನ್ನದ ಪದಕ‌ಬಚಿದ ಚಿನ್ನದ ಹುಡುಗಿ
ಹಕ್ಕು ಪತ್ರಕ್ಕೆ ಸಿದ್ಧರಾಮಯ್ಯನವರನ್ನ ಕೇಳಬೇಕಂತಾರೆ ಪಿಡಿಓ:ಕೊಣ್ಣೂರು ಗ್ರಾಮಸ್ಥರು
ಅನ್ಯಗ್ರಹ ಜೀವಿಗಳ ಬಗ್ಗೆ ನಾಸಾ ಸ್ಪೋಟಕ ಮಾಹಿತಿ..!ಏನಾಗಲಿದೆ 2030ರಲ್ಲಿ
ಶ್ರೀ ರಾಮಾರೂಢ ಸ್ವಾಮಿಜಿಗೆ ಕೋಟಿ ವಂಚನೆ:ಕಂತೆ ಕಂತೆ ಹಣ ಜಪ್ತಿ
ರಾಮಾರೂಢ ಶ್ರೀಗಳಿಗೆ ವಂಚಿಸಿದವ ನನ್ನ ಸಹೋದರಿಗೆ ಕಾರು ಬೇಕಂತ ವಂಚಿಸಿದ್ದ
ಸಿಎಂ ಪತ್ನಿ ಮೂಡಾ ಸೈಟ ಹಿಂತಿರುಗಿಸಿದ್ದು ಯಾಕೆ ಗೊತ್ತಾ?ಆರ್.ಬಿ.ತಿಮ್ಮಾಪೂರ್
ಲಡ್ಡು ಮುತ್ಯಾರನ್ನ ಅವಮಾನಿಸಬೇಡಿ ಯೂಟ್ಮಯೂಬ್ಲ್ಯಾ ಸ್ಟಾರ್ ಬಾಗಲಕೋಟ ಮನವಿ
ದೇವರು ಹೆಂಗ‌ ಬರ್ತಾನ?ಬೆಂಕಿ ಬಬಲಾದಿ
ರೋಬೋ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಡಾ.ಕಟ್ಟಿ ಆಸ್ಪತ್ರೆ
ಶ್ರೀ ಮುತ್ತಿನಕಂಠಿ ಹಿರೇಮಠದಲ್ಲಿ ಮನೆಮಾಡಿದ ನವರಾತ್ರಿ ಹಬ್ಬದ ಸಂಭ್ರಮ
Indo Israel Rasavari Project
ಕೈ ಯಲ್ಲಿ ಖಡ್ಗ ಹಿಡಿದು ದುರ್ಗಾ ಮಾತಾ ದೌಡನಲ್ಲಿ ಭಾಗಿಯಾದ ದುರ್ಗೆಯ ಭಕ್ತರು
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಟ್ಟ ಮಾಜಿ ಸಚಿವ ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಕಂಪ್ಲೀಟ ರೌಂಡಪ್
BAGALKOT DAILY ROUNDUP 17-18-2024
BAGALKOT DAILY ROUNDUP 19-18-2024
BAGALKOT DAILY ROUNDUP 22-10-2024
ಎಂ.ಎಲ್.ಸಿ. ಪಿ.ಹೆಚ್.ಪೂಜಾರ ವಿರುದ್ದ ಬಿಜೆಪಿ ಹಿರಿಯ ಮುಖಂಡರ ವಾಗ್ದಾಳಿ
ಮೂವತ್ತರ ಪಾಕ್ ಯುವಕನೊಂದಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಲವ್ ಸ್ಟೋರಿ, ದೇಶಕ್ಕೆ ದ್ರೋಹ
ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನೆ
ಆರ್.ಸಿ.ಬಿ ಅಭಿಮಾನಿಗಳಿಂದ ಗೆಲುವಿಗೆ ಪೂಜೆ
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ
ಯುವಕರನ್ನ ನಾಚಿಸುವಂತಿದೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಯೋಗ
ಮುಂದಿನ ಮುಖ್ಯಮಂತ್ರಿ ಬಾಲಚಂದ್ರ ಜಾರಕಿಹೊಳಿ

Leave a Comment