ಬ್ರೇಕಿಂಗ್ ನ್ಯೂಸ್ ಬ್ರೇಕಿಂಗ್ ನ್ಯೂಸ್

ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ

by 1 on | 2025-05-09 15:11:50 Last Updated by 1 on2026-01-01 04:05:58

Share: Facebook | Twitter | Whatsapp | Linkedin | Visits: 214


ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಶ್ರೀ ಕಣವಿ ವೀರಭದ್ರೇಶ್ವರನಿಗೆ ಬಿಜೆಪಿಗರ ವಿಶೇಷ ಪೂಜೆ ಭಾರತೀಯ ಸೈನಿಕರ ರಕ್ಷಣೆಗೆ ಪ್ರಾರ್ಥನೆ

ಬಾಗಲಕೊಟೆ: ದೇಶದ ಸಮರ್ಥ ನಾಯಕ ಹಾಗೂ ಸಮರ್ಥ ಸೈನಿಕರಿಂದ ಅಪರೇಷನ್ ಸಿಂಧೂರ್ ಮೂಲಕ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಗೋತ್ತಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಭಾರತೀಯ ಜನತಾ ಪಕ್ಷ ನಗರ ಮಂಡಳವತಿಯಿಂದ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ  ಪಾಕ್ ವಿರುದ್ದ ಯುದ್ದದಲ್ಲಿ ಭಾರತ ಜಯಶಾಲಿಯಾಗಲಿ, ದೇಶದ ವೀರ ಯೋಧರಿಗೆ ಶಕ್ತಿ ತುಂಬಿ ಆತ್ಮಸ್ಥೈರ್ಯ ಬಲಗೊಳ್ಳಲಿ, ಯೋಧರಿಗೆ ಹಾಗೂ ಯೋಧರ ಕುಟುಂಬಕ್ಕೂ ದೇವರ ಅನುಗ್ರಹ ಇರಲೆಂದು ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಮಾತನಾಡಿದರು.

ಸುಮಾರು 75 ವರ್ಷಗಳಿಂದ ಈ ಮಗ್ಗಲ ಮುಳ್ಳು ಪಾಕಿಸ್ತಾನ ಒಂದಿಲ್ಲಾ ಒಂದು ಕಾರಣದಿಂದ ಭಾರತ ತಂಟೆಗೆ ಬರುತ್ತಿತ್ತು, ಆದರೆ ಇವತ್ತು ಸತ್ತ ಹಾವು ಆದಂಗ ಆಗಿದೆ, ಅದು ಒಂದು ದೇಶ ಎಂಬ ಭಾವನೆನೆ ಇಲ್ಲದಾಗಿದೆ, ಆದರೆ ಭಾರತದ ನೇತೃತ್ವ ಬಹಳ ಸದೃಡವಾಗಿದೆ, ಪ್ರಧಾನ ಮಂತ್ರಿಗಳು ಅತಿ ಸೂಕ್ಷಾತ್ಮಿ ಸೂಕ್ಷ್ಮ ವಿಚಾರಗಳನ್ನು ತೆಗೆದುಕೋಂಡು, ಎಲ್ಲ ರೀತಿ ದಾಳಿಯನ್ನು ಭಾರತ ಮಾಡಿದೆ, ಪಾಕಿಸ್ತಾನದ 15 ಪ್ರಮುಖ ನಗರ ಮೇಲೆ ದಾಳಿ ಮಾಡಿ ಅವರ ಉತ್ತರಕ್ಕೆ ತಕ್ಕ ಪತ್ಯುತ್ತರ ಕೋಡುವಲ್ಲಿ ಭಾರತ ಯಶಸ್ವಿಯಾಗಿದೆ, ಈ ಭಾರಿ ಮಾತ್ರ ಪಾಕಿಸ್ತಾನ ಛಿದ್ರ ಛಿದ್ರವಾಗುವಲ್ಲಿ ಎರಡು ಮಾತಿಲ್ಲಾ, ಪಾಕಿಸ್ತಾನದ ಹುಟ್ಟನ್ನು ಅಡಗಿಸುವಲ್ಲಿ ಯಾವುದೆ ಸಂಶಯವಿಲ್ಲ, ಪ್ರಧಾನ ಮಂತ್ರಿಗಳು, ಗೃಹ ಸಚಿವರು, ರಕ್ಷಾ ಮಂತ್ರಿಗಳು, ಮೂರು ಸೇನಾ ಮುಖ್ಯಸ್ಥರು ಕೂಡಿಕೊಂಡು ಎಲ್ಲರೂ ವಾರ್ ರೂಮ್ ನಲ್ಲಿ ಕುಳಿತು ಸತತ ಮಾನೆಟ್ರಿಂಗ್ ಮಾಡತಿದ್ದರು, ಮಿಸಲೆಗಳನ್ನು ಆಕಾಶದಲ್ಲಿಯೇ ಹೊಡೆದಾಕಿದರು, ಯಾರಿಗೂ ಕೂಡಾ ಹಾನಿಯಾಗದಂತೆ ಜಾಗೃತವಹಿಸಿದ್ದರು, ಅತ್ಯಾಧುನಿಕ ತರಬೇತಿಯನ್ನು ನಮ್ಮ ಸೈನಿಕರು ಹೊಂದಿದ್ದಾರೆ, ವಿಶ್ವಕ್ಕೆ ಭಾರತದ ತಾಕತ್ತು ಗೊತ್ತಾಗಿದೆ, ಒಬ್ಬ ಸದೃಡ ಪ್ರಧಾನಿಯಿದ್ದರೆ ದೇಶ ಯಶಸ್ವಿಯಾಗಿ ನಡೆಯುತ್ತದೆ ಎಂಬುದಕ್ಕೆ ಇದು ಉದಾರಣೆಯಾಗಿದೆ ಎಂದರು.

ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಪಾಕಿಸ್ತಾನದ ಜೊತೆ ಇದು ಭಾರತದ ಕೋನೆ ಯುದ್ದವಾಗಿದೆ, ಜಗತ್ತಿನ ನಕಾಶದಿಂದಲೇ ಪಾಕಿಸ್ತಾನವನ್ನು ಕಿತ್ತುಹಾಕುವ ಸಂಕಲ್ಪ ಮಾಡಿದ್ದಾರೆ, ನಮ್ಮ ಸೈನೀಕರ ಎಷ್ಟು ಪ್ರಶಂಶೆ ಮಾಡಿದರು ಕಡಿಮೆ, ಯಾವುದೆ ನಾಗರಿಕರನ್ನು ಹೊಡಿಯದೆ ಬರಿ ಉಗ್ರ ಹಾಗೂ ಉಗ್ರರ ಕ್ಯಾಂಪಗಳ ಮೇಲೆ ದಾಳಿ ಮಾಡಿದ್ದು ಇಡಿ ಜಗತ್ತೆ ಮೆಚ್ಚಿಕೊಳ್ಳುತ್ತಿದೆ, ಜಗತ್ತು ಭಾರತದ ಜೋತಗೆ ಇದೆ, ಜೋತಗೆ ಭಾರತದೊಳಗಿನ ಅನೇಕ ದೇಶದ್ರೋಹಿಗಳ ವಿರುದ್ದವವು ಹೋರಾಡಬೇಕಿದೆ, ಬರುವಂತ ದಿನಗಲ್ಲಿ ಉಗ್ರಗಾಮಿ ಎಂಬ ಪದವೆ ನಿರ್ನಾಮವಾಗುತ್ತದೆ ಎಂದರು.

ಮುಖಂಡರಾದ ಜಿ.ಎನ್. ಪಾಟೀಲ. ಡಾ.ಎಂ.ಎಸ್.ದಡ್ಡೆನ್ವರ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ.ಶ್ರೀಧರ ನಾಗರಬೇಟ್ಟ, ರಾಜು ನಾಯ್ಕರ, ನಗರಸಭೇ ಅಧ್ಯಕ್ಷೆ ಸವಿತಾ ಲಂಕೆನ್ನವರ, ಯಲಪ್ಪ ನಾರಾಯಣಿ, ಭಾಗೀರತಿ ಪಾಟೀಲ, ಭುವನೇಶ್ವರಿ ಕುಪ್ಪಸ್ತ, ಲಕ್ಷ್ನೀ ನಾರಾಯಣ ಕಾಸಟ, ಬಸವರಾಜ ಯಂಕಂಚಿ, ಸಂಗಣ್ಣ ಶಿರೂರ, ಮಲ್ಲಿಕಾರ್ಜುನ ಮಠ, ಸಂಗಪ್ಪ ಕುಪ್ಪಸ್ತ, ಪರಮೇಶ್ವರ ಮದೂರ, ಕಲ್ಲಪ್ಪ ಭಗವತಿ, ಕ್ಯಾಪ್ಟನ್ ಅರ್ಜುನ ಕೋರಿ, ರಾಜು ದಂಡಿಗಿ, ಮಾನೆಶ ಅಂಬಿಗೇರ, ನೀಲಪ್ಪ ಬೇವೂರ, ಶಂಕರ ತೇಲಕರ, ಶಂಕರ ಅರಷಿಣಗುಡಿ, ಶ್ರೀಶೈಲ ಗಾಣಿಗೇರ, ಅಂಬಾಜಿ ಜೋಷಿ, ಚೆನ್ನಯ್ಯ ಹಿರೇಮಠ, ದ್ಯಾವಪ್ಪ ರಾಕುಂಪಿ, ರೇಖಾ ಕಲಬುರಗಿ, ಸುಜಾರ ಮಜ್ಜಗಿ, ಪ್ರೇಮಾ ಅಂಬಿಗೇರ, ಅನಿತಾ ಸರೋಧೆ, ಮುತ್ತಣ್ಣ ಕುರಬರ, ಚಂದ್ರಕಾಂತ ಖಾತೆದಾರ, ಚಂದ್ರು ರಾಮವಡಗಿ, ಅಶೋಕ ಪವಾರ, ನಾಗರಾಜ ನಾರಾಯಣಕರ, ರವಿ ನಾಯಕ್, ದೂಳಪ್ಪ ಕೊಪ್ಪದ,ಆನಂದ ಕೋಟಗಿಸೇರಿದಂತೆ ಅನೇಕರು ಇದ್ದರು. 


Search
Most Popular
ಒಂದು ಕೋಟಿ ರೂಪಾಯಿ ವಂಚನೆ ಪ್ರಕರಣ ಶ್ರೀ ರಾಮಾರೂಢ ಸ್ವಾಮೀಜಿ ಹೇಳಿದ್ದೇನು?
ಹದಿನಾರು ಚಿನ್ನದ ಪದಕ ಬಾಚಿದ ಚಿನ್ನದ ಹುಡುಗಿ
ತೋಟಗಾರಿಕಾ ಬಿ.ಎಸ್.ಸಿ ಯಲ್ಲಿ 16 ಚಿನ್ನದ ಪದಕ‌ಬಚಿದ ಚಿನ್ನದ ಹುಡುಗಿ
ಹಕ್ಕು ಪತ್ರಕ್ಕೆ ಸಿದ್ಧರಾಮಯ್ಯನವರನ್ನ ಕೇಳಬೇಕಂತಾರೆ ಪಿಡಿಓ:ಕೊಣ್ಣೂರು ಗ್ರಾಮಸ್ಥರು
ಅನ್ಯಗ್ರಹ ಜೀವಿಗಳ ಬಗ್ಗೆ ನಾಸಾ ಸ್ಪೋಟಕ ಮಾಹಿತಿ..!ಏನಾಗಲಿದೆ 2030ರಲ್ಲಿ
ಶ್ರೀ ರಾಮಾರೂಢ ಸ್ವಾಮಿಜಿಗೆ ಕೋಟಿ ವಂಚನೆ:ಕಂತೆ ಕಂತೆ ಹಣ ಜಪ್ತಿ
ರಾಮಾರೂಢ ಶ್ರೀಗಳಿಗೆ ವಂಚಿಸಿದವ ನನ್ನ ಸಹೋದರಿಗೆ ಕಾರು ಬೇಕಂತ ವಂಚಿಸಿದ್ದ
ಸಿಎಂ ಪತ್ನಿ ಮೂಡಾ ಸೈಟ ಹಿಂತಿರುಗಿಸಿದ್ದು ಯಾಕೆ ಗೊತ್ತಾ?ಆರ್.ಬಿ.ತಿಮ್ಮಾಪೂರ್
ಲಡ್ಡು ಮುತ್ಯಾರನ್ನ ಅವಮಾನಿಸಬೇಡಿ ಯೂಟ್ಮಯೂಬ್ಲ್ಯಾ ಸ್ಟಾರ್ ಬಾಗಲಕೋಟ ಮನವಿ
ದೇವರು ಹೆಂಗ‌ ಬರ್ತಾನ?ಬೆಂಕಿ ಬಬಲಾದಿ
ರೋಬೋ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಡಾ.ಕಟ್ಟಿ ಆಸ್ಪತ್ರೆ
ಶ್ರೀ ಮುತ್ತಿನಕಂಠಿ ಹಿರೇಮಠದಲ್ಲಿ ಮನೆಮಾಡಿದ ನವರಾತ್ರಿ ಹಬ್ಬದ ಸಂಭ್ರಮ
Indo Israel Rasavari Project
ಕೈ ಯಲ್ಲಿ ಖಡ್ಗ ಹಿಡಿದು ದುರ್ಗಾ ಮಾತಾ ದೌಡನಲ್ಲಿ ಭಾಗಿಯಾದ ದುರ್ಗೆಯ ಭಕ್ತರು
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಟ್ಟ ಮಾಜಿ ಸಚಿವ ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಕಂಪ್ಲೀಟ ರೌಂಡಪ್
BAGALKOT DAILY ROUNDUP 17-18-2024
BAGALKOT DAILY ROUNDUP 19-18-2024
BAGALKOT DAILY ROUNDUP 22-10-2024
ಎಂ.ಎಲ್.ಸಿ. ಪಿ.ಹೆಚ್.ಪೂಜಾರ ವಿರುದ್ದ ಬಿಜೆಪಿ ಹಿರಿಯ ಮುಖಂಡರ ವಾಗ್ದಾಳಿ
ಮೂವತ್ತರ ಪಾಕ್ ಯುವಕನೊಂದಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಲವ್ ಸ್ಟೋರಿ, ದೇಶಕ್ಕೆ ದ್ರೋಹ
ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನೆ
ಆರ್.ಸಿ.ಬಿ ಅಭಿಮಾನಿಗಳಿಂದ ಗೆಲುವಿಗೆ ಪೂಜೆ
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ
ಯುವಕರನ್ನ ನಾಚಿಸುವಂತಿದೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಯೋಗ
ಮುಂದಿನ ಮುಖ್ಯಮಂತ್ರಿ ಬಾಲಚಂದ್ರ ಜಾರಕಿಹೊಳಿ

Leave a Comment