by 1 on | 2025-09-13 11:23:13 Last Updated by 1 on2026-01-01 06:02:31
Share: Facebook | Twitter | Whatsapp | Linkedin | Visits: 597
ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಮಳೆ ಸುರಿದಿದ್ದು ಎಂದು ನಂಬಿರುವ ಭಕ್ತರು ಆಶ್ಚರ್ಯ ಚಕಿತಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ನಡೆದಿದೆ.
ಹೆಗ್ಗೂರು ಗ್ರಾಮದ ಆರಾಧ್ಯ ದೈವ ಸಂಜೀವ ಮೂರ್ತಿ ದೇವಸ್ಥಾನ ಉರ್ಫ್ ಆಂಜನೇಯನ ದೇವಸ್ಥಾನದ ಆರಣದ ಸುತ್ತ ಭಂಡಾರದ ಪುಡಿ ಲಭ್ಯವಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ದಿನ ಸೆ.12.ರ ಸಂಜೆ ಹೊತ್ತು ಕೆಲಹೊತ್ತು ಮಳೆ ರೂಪದಲ್ಲಿ ಭಂಡಾರ ಸಿಂಪರಣೆ ಆಗಿದೆ,ಇದನ್ನ ಕಣ್ಣಾರೆ ನೋಡಿದ್ದಾಗಿ ಗ್ರಾಮದ ಹಿರಿಯ ಜೀವಿ ತೊಂಭತ್ತು ವರ್ಷದ ಸಿದ್ದವ್ವ ಎನ್ನುವ ವಯೋವೃದ್ಧರು ಹೇಳಿಕೊಂಡಿದ್ದಾರೆ.
ಇನ್ನು ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಕೂಡ ದೇವಸ್ಥಾನದ ಸುತ್ತ ಸಿಂಪರಣೆಯಾಗಿರುವ ಭಂಡಾರವನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.ಹಣೆ ಮೇಲೆ ಹಚ್ಚಿಕೊಂಡು ಭಾವಪರವಶರಾಗಿದ್ದಾರೆ.ದೇವಸ್ಥಾನಕ್ಕೆ ಭಕ್ತರ ದಂಡು ದೌಡಾಯಿಸುತ್ತಿದೆ.
ಇನ್ನು ಈ ಗ್ರಾಮಸ್ಥರು ತಮ್ಮ ಹಳೆ ಹೆಗ್ಗೂರು ಗ್ರಾಮ ಮುಳುಗಡೆ ಕಂಡ ಬಳಿಕ ಈಗ ಈ ಹೊಸ ಹೆಗ್ಗೂರು ಗ್ರಾಮವಾಗಿ ಪುನರ್ ನಿರ್ಮಾಣಗೊಂಡಿದ್ದು,ಹಳೆ ಊರು ಮುಳುಗಿದ ಬಳಿಕ ಎಲ್ಲ ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ.
ಈ ದೇವಸ್ಥಾನ ಜಾಗೃತ ದೇವಸ್ಥಾನವಾಗಿದೆ ಎಂಬುದು ಭಕ್ತರ ನಂಬಿಕೆ.ಸುತ್ತ ಹತ್ತು ಗ್ರಾಮಗಳ ಜನರು ಕೂಡ ಈ ಸಂಜೀವ ಮೂರ್ತಿ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.ಗ್ರಾಮದ ರಕ್ಷಕ ಎನ್ನುವ ನಂಬಿಕೆ ಇದೆ.
ಹೀಗಾಗಿ ಸಧ್ಯ ದೇವಸ್ಥಾನದ ಸುತ್ತ ನಿನ್ನೆ ಸಂಜೆ ಮಳೆ ರೂಪದಲ್ಲಿ ಸಿಂಪರಣೆಯಾಗಿದೆ ಎನ್ನಲಾದ ಭಂಡಾರ ಎಲ್ಲರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಈ ಕುರಿತು ಸ್ಥಳೀಯ ಭಕ್ತ ಕೆಂಚಪ್ಪ ಅವರು ಕೂಡ ದೇಸ್ಥಾನದ ಸುತ್ತ ನೋಡಿದಾಗ ಭಂಡಾರ ದೊರೆತಿದ್ದು ಇದು ಮಳೆ ಸಿಂಪರಣೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇದು ಒಳ್ಳೆಯದಕ್ಕಾಗಿದೆ ಎನ್ನೋದು ಭಕ್ತರ ನಂಬಿಕೆಯಾಗಿದೆ.
ಇದೆಲ್ಲದರ ನಡುವೆ ಹೀಗೂ ಆಗೋಕೆ ಸಾಧ್ಯಾನಾ ಎನ್ನುವ ಪ್ರಶ್ನೆಕಾಡುತ್ತೆ.ಇದು ಮಾನವ ನಿರ್ಮಿತವೇ ಅಥವಾ ನಿಜವಾಗಲೂ ಮಳೆ ರೂಪದಲ್ಲಿ ಭಂಢಾರ ಸಿಂಪರಣೆಯಾಗಿದೆ ಎನ್ನೋದು ಮಾತ್ರ ನಿಗೂಢ.
ಇದು ಪವಾಡವೋ ಮೌಢ್ಯವೋ ಎನ್ನೋದು ಆ ಶ್ರೀರಾಮ ಭಕ್ತ ಹನುಮನೇ ಬಲ್ಲ
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ