ನಮ್ಮೂರು ನಮ್ಮೂರು

ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಮಳೆ? ಹರಿದು ಬಂತು ಭಕ್ತರ ದಂಡು

by 1 on | 2025-09-13 11:23:13 Last Updated by 1 on2026-01-01 06:02:31

Share: Facebook | Twitter | Whatsapp | Linkedin | Visits: 597


ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಮಳೆ? ಹರಿದು ಬಂತು ಭಕ್ತರ ದಂಡು
ಆಂಜನೇಯನ ದೇವಸ್ಥಾನದ‌‌ ಸುತ್ತ ಭಂಡಾರದ ರಹಸ್ಯ

ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಮಳೆ ಸುರಿದಿದ್ದು ಎಂದು ನಂಬಿರುವ ಭಕ್ತರು ಆಶ್ಚರ್ಯ ಚಕಿತಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ನಡೆದಿದೆ.

ಹೆಗ್ಗೂರು ಗ್ರಾಮದ ಆರಾಧ್ಯ ದೈವ ಸಂಜೀವ ಮೂರ್ತಿ ದೇವಸ್ಥಾನ ಉರ್ಫ್ ಆಂಜನೇಯನ ದೇವಸ್ಥಾನದ ಆರಣದ ಸುತ್ತ ಭಂಡಾರದ ಪುಡಿ ಲಭ್ಯವಾಗಿದೆ.

ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ದಿನ ಸೆ.12.ರ ಸಂಜೆ ಹೊತ್ತು ಕೆಲಹೊತ್ತು ಮಳೆ‌ ರೂಪದಲ್ಲಿ ಭಂಡಾರ ಸಿಂಪರಣೆ ಆಗಿದೆ,ಇದನ್ನ ಕಣ್ಣಾರೆ ನೋಡಿದ್ದಾಗಿ ಗ್ರಾಮದ ಹಿರಿಯ ಜೀವಿ ತೊಂಭತ್ತು ವರ್ಷದ ಸಿದ್ದವ್ವ ಎನ್ನುವ ವಯೋವೃದ್ಧರು ಹೇಳಿಕೊಂಡಿದ್ದಾರೆ.

ಇನ್ನು ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಕೂಡ ದೇವಸ್ಥಾನದ ಸುತ್ತ ಸಿಂಪರಣೆಯಾಗಿರುವ ಭಂಡಾರವನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.ಹಣೆ ಮೇಲೆ ಹಚ್ಚಿಕೊಂಡು ಭಾವಪರವಶರಾಗಿದ್ದಾರೆ.ದೇವಸ್ಥಾನಕ್ಕೆ ಭಕ್ತರ ದಂಡು ದೌಡಾಯಿಸುತ್ತಿದೆ.

ಇನ್ನು ಈ ಗ್ರಾಮಸ್ಥರು ತಮ್ಮ ಹಳೆ ಹೆಗ್ಗೂರು ಗ್ರಾಮ ಮುಳುಗಡೆ ಕಂಡ ಬಳಿಕ ಈಗ‌ ಈ  ಹೊಸ ಹೆಗ್ಗೂರು ಗ್ರಾಮವಾಗಿ ಪುನರ್ ನಿರ್ಮಾಣಗೊಂಡಿದ್ದು,ಹಳೆ ಊರು ಮುಳುಗಿದ ಬಳಿಕ ಎಲ್ಲ ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ.

ಈ ದೇವಸ್ಥಾನ ಜಾಗೃತ ದೇವಸ್ಥಾನವಾಗಿದೆ ಎಂಬುದು ಭಕ್ತರ ನಂಬಿಕೆ.ಸುತ್ತ ಹತ್ತು ಗ್ರಾಮಗಳ ಜನರು ಕೂಡ ಈ ಸಂಜೀವ ಮೂರ್ತಿ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.ಗ್ರಾಮದ ರಕ್ಷಕ ಎನ್ನುವ ನಂಬಿಕೆ ಇದೆ.

ಹೀಗಾಗಿ ಸಧ್ಯ ದೇವಸ್ಥಾನದ ಸುತ್ತ ನಿನ್ನೆ ಸಂಜೆ ಮಳೆ ರೂಪದಲ್ಲಿ  ಸಿಂಪರಣೆಯಾಗಿದೆ ಎನ್ನಲಾದ ಭಂಡಾರ ಎಲ್ಲರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

ಈ ಕುರಿತು ಸ್ಥಳೀಯ ಭಕ್ತ ಕೆಂಚಪ್ಪ ಅವರು ಕೂಡ ದೇಸ್ಥಾನದ ಸುತ್ತ ನೋಡಿದಾಗ ಭಂಡಾರ ದೊರೆತಿದ್ದು ಇದು ಮಳೆ ಸಿಂಪರಣೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದು ಒಳ್ಳೆಯದಕ್ಕಾಗಿದೆ ಎನ್ನೋದು ಭಕ್ತರ ನಂಬಿಕೆಯಾಗಿದೆ.

ಇದೆಲ್ಲದರ ನಡುವೆ ಹೀಗೂ ಆಗೋಕೆ ಸಾಧ್ಯಾನಾ ಎನ್ನುವ ಪ್ರಶ್ನೆಕಾಡುತ್ತೆ.ಇದು ಮಾನವ ನಿರ್ಮಿತವೇ ಅಥವಾ ನಿಜವಾಗಲೂ ಮಳೆ ರೂಪದಲ್ಲಿ ಭಂಢಾರ ಸಿಂಪರಣೆಯಾಗಿದೆ ಎನ್ನೋದು ಮಾತ್ರ ನಿಗೂಢ.

ಇದು ಪವಾಡವೋ ಮೌಢ್ಯವೋ ಎನ್ನೋದು ಆ ಶ್ರೀರಾಮ ಭಕ್ತ ಹನುಮನೇ ಬಲ್ಲ

Search
Most Popular
ಒಂದು ಕೋಟಿ ರೂಪಾಯಿ ವಂಚನೆ ಪ್ರಕರಣ ಶ್ರೀ ರಾಮಾರೂಢ ಸ್ವಾಮೀಜಿ ಹೇಳಿದ್ದೇನು?
ಹದಿನಾರು ಚಿನ್ನದ ಪದಕ ಬಾಚಿದ ಚಿನ್ನದ ಹುಡುಗಿ
ತೋಟಗಾರಿಕಾ ಬಿ.ಎಸ್.ಸಿ ಯಲ್ಲಿ 16 ಚಿನ್ನದ ಪದಕ‌ಬಚಿದ ಚಿನ್ನದ ಹುಡುಗಿ
ಹಕ್ಕು ಪತ್ರಕ್ಕೆ ಸಿದ್ಧರಾಮಯ್ಯನವರನ್ನ ಕೇಳಬೇಕಂತಾರೆ ಪಿಡಿಓ:ಕೊಣ್ಣೂರು ಗ್ರಾಮಸ್ಥರು
ಅನ್ಯಗ್ರಹ ಜೀವಿಗಳ ಬಗ್ಗೆ ನಾಸಾ ಸ್ಪೋಟಕ ಮಾಹಿತಿ..!ಏನಾಗಲಿದೆ 2030ರಲ್ಲಿ
ಶ್ರೀ ರಾಮಾರೂಢ ಸ್ವಾಮಿಜಿಗೆ ಕೋಟಿ ವಂಚನೆ:ಕಂತೆ ಕಂತೆ ಹಣ ಜಪ್ತಿ
ರಾಮಾರೂಢ ಶ್ರೀಗಳಿಗೆ ವಂಚಿಸಿದವ ನನ್ನ ಸಹೋದರಿಗೆ ಕಾರು ಬೇಕಂತ ವಂಚಿಸಿದ್ದ
ಸಿಎಂ ಪತ್ನಿ ಮೂಡಾ ಸೈಟ ಹಿಂತಿರುಗಿಸಿದ್ದು ಯಾಕೆ ಗೊತ್ತಾ?ಆರ್.ಬಿ.ತಿಮ್ಮಾಪೂರ್
ಲಡ್ಡು ಮುತ್ಯಾರನ್ನ ಅವಮಾನಿಸಬೇಡಿ ಯೂಟ್ಮಯೂಬ್ಲ್ಯಾ ಸ್ಟಾರ್ ಬಾಗಲಕೋಟ ಮನವಿ
ದೇವರು ಹೆಂಗ‌ ಬರ್ತಾನ?ಬೆಂಕಿ ಬಬಲಾದಿ
ರೋಬೋ ತಂತ್ರಜ್ಞಾನದ ಮೂಲಕ ಯಶಸ್ವಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಡಾ.ಕಟ್ಟಿ ಆಸ್ಪತ್ರೆ
ಶ್ರೀ ಮುತ್ತಿನಕಂಠಿ ಹಿರೇಮಠದಲ್ಲಿ ಮನೆಮಾಡಿದ ನವರಾತ್ರಿ ಹಬ್ಬದ ಸಂಭ್ರಮ
Indo Israel Rasavari Project
ಕೈ ಯಲ್ಲಿ ಖಡ್ಗ ಹಿಡಿದು ದುರ್ಗಾ ಮಾತಾ ದೌಡನಲ್ಲಿ ಭಾಗಿಯಾದ ದುರ್ಗೆಯ ಭಕ್ತರು
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಗೆ ಮರುಜೀವ ಕೊಟ್ಟ ಮಾಜಿ ಸಚಿವ ಎಸ್.ಆರ್.ಪಾಟೀಲ್
ಬಾಗಲಕೋಟೆ ಜಿಲ್ಲೆಯ ಕಂಪ್ಲೀಟ ರೌಂಡಪ್
BAGALKOT DAILY ROUNDUP 17-18-2024
BAGALKOT DAILY ROUNDUP 19-18-2024
BAGALKOT DAILY ROUNDUP 22-10-2024
ಎಂ.ಎಲ್.ಸಿ. ಪಿ.ಹೆಚ್.ಪೂಜಾರ ವಿರುದ್ದ ಬಿಜೆಪಿ ಹಿರಿಯ ಮುಖಂಡರ ವಾಗ್ದಾಳಿ
ಮೂವತ್ತರ ಪಾಕ್ ಯುವಕನೊಂದಿಗೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಲವ್ ಸ್ಟೋರಿ, ದೇಶಕ್ಕೆ ದ್ರೋಹ
ಬಾಗಲಕೋಟೆ ರೈಲು ನಿಲ್ದಾಣದ ಉದ್ಘಾಟನೆ
ಆರ್.ಸಿ.ಬಿ ಅಭಿಮಾನಿಗಳಿಂದ ಗೆಲುವಿಗೆ ಪೂಜೆ
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಹಲ್ಲಾದ ಜೋಶಿ
ಯುವಕರನ್ನ ನಾಚಿಸುವಂತಿದೆ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಯೋಗ
ಮುಂದಿನ ಮುಖ್ಯಮಂತ್ರಿ ಬಾಲಚಂದ್ರ ಜಾರಕಿಹೊಳಿ

Leave a Comment